ಗುರುವಾರ, ಮಾರ್ಚ್ 23, 2017

ಗುಡಿಹಳ್ಳಿ ಎಂಬ ನಾಗಣ್ಣನ ಸಣ್ಣತನದ ವೃತ್ತಾಂತ:






ಸ್ವಂತ ಬುದ್ದಿ ಇಲ್ಲದಿದ್ದರೂ ಬುದ್ದಿಜೀವಿ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ ಅದೆಷ್ಟರ ಮಟ್ಟಿಗೆ ಸಣ್ಣತನವನ್ನು ತೋರಿಸಬಹುದು? ನಾಟಕಗಳ ವರದಿ  ಬರೆದು ವಿಮರ್ಶಕನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಇನ್ನೆಷ್ಟು ದುರುಳತನವನ್ನು ವ್ಯಕ್ತಪಡಿಸಬಹುದು ಎನ್ನುವುದಕ್ಕೆ ಪರಮ ಸಾಕ್ಷಿ ಗುಡಿಹಳ್ಳಿ ನಾಗರಾಜ್. ನಾಗರ ಹಾವಿಗೆ ಹಲ್ಲಲ್ಲಿ ಮಾತ್ರ ವಿಷವಿದ್ದರೆ ಈ ವ್ಯಕ್ತಿಗೆ ಮೈಯೆಲ್ಲಾ ವಿಷವೆನ್ನುವುದನ್ನು ತನ್ನ ಕೃತ್ಯಗಳಿಂದಲೇ ಸಾಬೀತುಪಡಿಸುತ್ತಿರುವುದು ಅಕ್ಷಮ್ಯ. ವಯಸ್ಸಾದಂತೆ ವ್ಯಕ್ತಿ ಮಾಗುತ್ತಾ.. ರಾಗದ್ವೇಷಗಳನ್ನು ತ್ಯಜಿಸುತ್ತಾ ಹೋಗಬೇಕು. ಆದರೆ.. ಸ್ವಾರ್ಥ ಹಾಗೂ ಸ್ವಜನಪಕ್ಷಪಾತವನ್ನೇ ರೂಢಿಸಿಕೊಂಡು ದ್ವೇಷ ಅಸೂಯೆಗಳನ್ನೇ ಉಸಿರಾಗಿಸಿಕೊಂಡ ವ್ಯಕ್ತಿ ಸಮಾಜದ ಕಣ್ಣಲ್ಲಿ ಹೇಗೆ ಕಸವಾಗುತ್ತಾನೆ ಎನ್ನುವುದಕ್ಕೆ ಜೀವಂತ ಉದಾಹರಣೆ ಗುಡಿಹಳ್ಳಿ ಸಾಹೇಬರು.


ಅಸಲಿಗೆ ಈಗ ಆಗಿದ್ದಾದರೂ ಏನಪಾಂತಂದ್ರೆ.. ರಂಗಸಂಘಟಕ ನಾಗರಾಜಮೂರ್ತಿಯವರು ವಿಶ್ವರಂಗಭೂಮಿ ದಿನಾಚರಣೆಯನ್ನು ಪ್ರೆಸ್‌ಕ್ಲಬ್ ಸಹಯೋಗದೊಂದಿಗೆ ಆಚರಿಸಬೇಕು ಎನ್ನುವ ಯೋಜನೆ ಹಾಕಿಕೊಂಡರು. ಮಾರ್ಚ 27 ರಂದು ವಿಶ್ವರಂಗಭೂಮಿ ದಿನವಾಗಿದ್ದರಿಂದ ಅದಕ್ಕೂ ಎರಡು ದಿನ ಮುಂಚೆ ಅಂದರೆ ಮಾರ್ಚ 25, 26 ಮತ್ತು 27 ರಂದು ಒಟ್ಟು ಮೂರು ದಿನಗಳ ಕಾಲ ನಾಟಕಗಳ ಸಂಭ್ರಮ, ಸಂವಾದ ಹಾಗೂ ರಂಗಗೌರವ ಕಾರ್ಯಕ್ರಮವನ್ನು ಏರ್ಪಡಿಸಿದರು. ಇದೊಂದು ಸ್ತುತ್ಯಾರ್ಹವಾದ ಸಂಗತಿ. ಯಾಕೆಂದರೆ ಪ್ರೆಸ್‌ಕ್ಲಬ್ಬನ್ನು ರಂಗಭೂಮಿಯ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವುದು ಹಾಗೂ ಪತ್ರಕರ್ತ ಮಿತ್ರರನ್ನು ಒಳಗೊಂಡಂತೆ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸುವುದು ರಂಗಭೂಮಿಯ ವ್ಯಾಪ್ತಿಯನ್ನು ಪತ್ರಿಕಾವಲಯಕ್ಕೂ ವಿಸ್ತರಿಸುವ ಉತ್ತಮ ಯೋಜನೆ. ಪ್ರತಿದಿನವೂ ಜ್ಞಾನಪೀಠ ಪುರಸ್ಕೃತರ ನಾಟಕವನ್ನು ಪ್ರದರ್ಶಿಸುವುದು ಹಾಗೂ ಪ್ರತಿದಿನ ಬೀದಿನಾಟಕಗಳನ್ನು ಆಡಿಸುವುದು ಇನ್ನೂ ಅರ್ಥಪೂರ್ಣವಾದಂತಹುದು. ಈ ಕಾರ್ಯಕ್ರಮದ ಭಾಗವಾಗಿ ಮಾ.೨೬ರ ಭಾನುವಾರದಂದು ಹಿರಿಯ ಕವಿ-ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ರವರೊಂದಿಗೆ ಬದಲಾಗುತ್ತಿರುವ ಸನ್ನಿವೇಶದಲ್ಲಿ ರಾಷ್ಟ್ರೀಯ ರಂಗಭೂಮಿ ಎನ್ನುವ ವಿಷಯದ ಮೇಲೆ ಸಂವಾದವನ್ನೂ ಏರ್ಪಡಿಸಿ ಸಂವಾದದಲ್ಲಿ ಭಾಗವಹಿಸುವವರ ಪಟ್ಟಿಯನ್ನು ಸಿದ್ದಗೊಳಿಸಲಾಗಿತ್ತು. ಪೂರ್ವಭಾವಿಯಾಗಿ ಕರೆದ ಸಭೆಯಲ್ಲಿ ಭಾಗವಹಿಸಿದ ಗುಡಿಹಳ್ಳಿ ನಾಗರಾಜರಿಗೆ ಆ ಪಟ್ಟಿಯಲ್ಲಿ ಇರುವ ಒಂದು ಹೆಸರನ್ನು ನೋಡಿದ ಕೂಡಲೇ ಮೈಯೆಲ್ಲಾ ಉರಿ ಎದ್ದಿತು. ಆ ಹೆಸರನ್ನು ತೆಗೆದು ಹಾಕಲೇಬೇಕೆಂದು ಹಠಕ್ಕೆ ಬಿದ್ದರು. ಆ ಹೆಸರೂ ಬೇರೆ ಯಾರದೂ ಅಲ್ಲಾ ಶಶಿಕಾಂತ ಯಡಹಳ್ಳಿ ಅಂದರೆ ನನ್ನ ಹೆಸರು.

ಅದ್ಯಾಕ್ರೀ ಯಡಹಳ್ಳಿ ಹೆಸರು ತೆಗೀಬೇಕು.. ಅವರೇನು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿಲ್ಲವಾ? ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷರಾದ ಶ್ರೀಧರರವರು ಪ್ರಶ್ನಿಸಿದಾಗ ಪ್ರೆಸ್‌ಕ್ಲಬ್ ವಾತಾವರಣ ಸರಿಯಿಲ್ಲವಾದ್ದರಿಂದಾ ಯಡಹಳ್ಳಿ ಹೆಸರು ಸಂವಾದದಲ್ಲಿ ಇರಕೂಡದು ಎಂದು ಗುಡಿಹಳ್ಳಿ ವತಾರಕ್ಕೆ ಬಿದ್ದರು. ಅವರ ವಿತಂಡವಾದದಿಂದ ರೋಸಿಹೋದ ನಾಗರಾಜಮೂರ್ತಿ ಯಾಕೆ ನಿಮ್ಮ ಬ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ಯಡಹಳ್ಳಿ ಬರೆದು ಬಯಲಿಗೆಳೆದಿದ್ದಕ್ಕೆ ಅವರ ಹೆಸರು ಬೇಡಾ ಎಂದು ಹೇಳುತ್ತಿದ್ದೀಯಲ್ಲಾ, ನೀನೇನು ರಂಗಭೂಮಿಗೆ ಮಾಡಿದ್ದು.. ಒಂದೇ ಒಂದು ನಾಟಕ ಮಾಡಿಲ್ಲಾ, ಮಾಡಿಸಿಲ್ಲಾ ಆದರೂ ರಂಗಭೂಮಿಯವನೆಂದು ಬಡಾಯಿ ಕೊಚ್ಚಿಕೊಳ್ತಿದ್ದೀ. ಯಡಹಳ್ಳಿ ನಾಟಕಗಳನ್ನ ಮಾಡಿಸ್ತಾನೇ ಇದಾನೆ, ಅಭಿನಯದ ಶಾಲೆಯನ್ನೇ ನಡಿಸ್ತಿದ್ದಾನೆ, ರಂಗಭೂಮಿ ಲೇಖನಗಳನ್ನ ಬರೀತಾನೇ ಇದ್ದಾನೆ. ರಂಗಭೂಮಿಯಲ್ಲಿ ಕೆಲಸ ಮಾಡುವವರನ್ನೇ ಬೇಡಾ ಅನ್ನಲು ನೀನ್ಯಾರು?.. ಎಂದು ಜೋರಾಗಿಯೇ ಕೇಳಿದಾಗ ಗುಡಿಹಳ್ಳಿ ತಣ್ಣಗಾದರು. ನಿಮ್ಮ ಹಾಗೆಯೇ ಯಡಹಳ್ಳಿ ಕೂಡಾ ಪ್ರೆಸ್‌ಕ್ಲಬ್ ಮೇಂಬರ್ ಆಗಿದ್ದಾರೆ. ಪ್ರೆಸ್‌ಕ್ಲಬ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರಿಗೆ ಎಲ್ಲಾ ಹಕ್ಕುಗಳೂ ಇವೆ. ಇದಕ್ಕೆಲ್ಲಾ ಬೇಡಾ ಎನ್ನುವುದು ಸರಿಯಲ್ಲಾ ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಹಾಗೂ ಕಾರ್ಯದರ್ಶಿ ಶಿವಪ್ರಕಾಶ್ ಹೇಳಿದರು. ತನ್ನ ಮಾತಿಗೆ ಯಾರೂ ಬೆಲೆಕೊಡದಿರುವಾಗ ಒಂಟಿಯಾದ ಗುಡಿಹಳ್ಳಿ ಸಿಟ್ಟಿಗೆದ್ದು ನಾನೇ ಈ ಸಂವಾದದಲ್ಲಿ ಭಾಗವಹಿಸೊದಿಲ್ಲಾ ಎಂದು ಹೇಳಿ ಅಲ್ಲಿಂದಾ ದುಮುಗುಡುತ್ತಲೇ ಜಾಗ ಖಾಲಿ ಮಾಡಿದರು. ಉಳಿದವರೆಲ್ಲಾ ಗುಡಿಹಳ್ಳಿಯ ಬಂಢತನವನ್ನು ನೋಡಿ ನಕ್ಕಿದ್ದು ಅವರಿಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲಾ. ಆದರೆ ನಾಗರಾಜರ ಬುಸುಗುಡುವಿಕೆ ಏನೂ ಕಡಿಮೆಯಾಗಿಲ್ಲ.

ಗುಡಿಹಳ್ಳಿ ನಾಗಣ್ಣ ಯಾಕೆ ಹೀಗೆ ಬುಸುಗುಟ್ಟಿತು ಎಂಬುದಕ್ಕೂ ಬಲು ದೊಡ್ಡ ಹಿನ್ನೆಲೆ ಇದೆ. ಈಗಾಗಲೇ ಒಮ್ಮೆ ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಗುಡಿಹಳ್ಳಿ ಕಳೆದ ಸಲ ಮತ್ತೆ ಸದಸ್ಯರಾಗಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿದ್ದ ಅವರ ಹೆಸರನ್ನು ಸಚಿವೆ ಉಮಾಶ್ರೀ ಕಿತ್ತು ಹಾಕಿದ್ದರು. ಎಲ್.ಕೃಷ್ಣಪ್ಪನವರು ಅಕಾಡೆಮಿ ಅಧ್ಯಕ್ಷರಾದರೆ ತಾನೂ ಹೇಗೋ ಕೋಆಪ್ಟ್ ಮೇಂಬರ್ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಕೃಷ್ಣಪ್ಪನವರ ಬಾಲಬಡಿದುಕೊಂಡು ಓಡಾಡಿದ ಗುಡಿಹಳ್ಳಿಯವರಿಗೆ ಯಾವಾಗ ಶೇಖ ಮಾಸ್ತರ ಹೆಸರು ಅಧ್ಯಕ್ಷಗಿರಿಗೆ ಪೈನಲ್ ಆಯಿತೋ ಆಗ ತಕ್ಷಣ ನಿಷ್ಟ ಬದಲಾಯಿಸಿ ಶೇಖರವರ ಹಿಂದೆ ದುಂಬಾಲು ಬಿದ್ದು ಅಕಾಡೆಮಿಗೆ ಕೋಅಪ್ಟ್ ಸದಸ್ಯರಾದರು. ಇದರ ಹಿಂದೆ ಗುಡಿಹಳ್ಳಿ ಮಾಡಿದ ಜಾತಿಯತೇ ಹಾಗೂ ಕುತಂತ್ರಗಳನ್ನೆಲ್ಲಾ ನಾನು ಲೇಖನದಲ್ಲಿ ಬರೆದು ಜನರ ಮುಂದೆ ಇಟ್ಟಿದ್ದೆ. ರಂಗಭೂಮಿಗೆ ಪ್ರತ್ಯಕ್ಷವಾಗಿ ಯಾವ ಕೊಡುಗೆಯನ್ನೂ ಕೊಡದ ಗುಡಿಹಳ್ಳಿಯವರು ಅರ್ಹರಾಗಿರುವ ಬೇರೆಯವರ ಅವಕಾಶವನ್ನು ಕಿತ್ತುಕೊಂಡಿದ್ದನ್ನು ವಿರೋಧಿಸಿದ್ದೆ. ಅವತ್ತಿಂದಾ ಶುರುವಾಯಿತು ನೋಡಿ ನಾಗಣ್ಣನ ದ್ವೇಷ. ಮೊದಲೆಲ್ಲಾ ನಿಜವಾದ ರಂಗವಿಮರ್ಶೆ ಎಂದರೆ ನಿಮ್ಮದು ಮಾತ್ರ. ಇಲ್ಲಿವರೆಗೂ ನನಗೆ ಕೇವಲ ರಂಗಮಾಹಿತಿಯ ವರದಿ ಮಾತ್ರ ಬರೆಯಲು ಸಾಧ್ಯವಾಯಿತು. ನೀವು ವಸ್ತುನಿಷ್ಟ ವಿಮರ್ಶೆ ಬರೆಯುತ್ತಿರುವುದು ನನಗೆ ಸಂತಸ ತಂದಿದೆ ಎಂದು ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ವಿಮರ್ಶೆಗಳನ್ನು ಓದಿ ಪೋನ್ ಮಾಡಿ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸುತ್ತಿದ್ದ ಗುಡಿಹಳ್ಳಿ ಇದ್ದಕ್ಕಿದ್ದಂತೆ ವಿಷಕಾರಲು ಶುರುಮಾಡಿದ್ದು ಅವರ ಸ್ವಭಾವ ಗೊತ್ತಿದ್ದ ನನಗೆ ಅಚ್ಚರಿ ಏನೂ ಆಗಲಿಲ್ಲ.

ಗುಡಿಹಳ್ಳಿ ನಾಟಕ ಅಕಾಡೆಮಿಯ ಪ್ರಶಸ್ತಿಯಲ್ಲಿ ಡೀಲ್ ಮಾಡಿಕೊಂಡು ಮುಖಭಂಗವಾಗಿದ್ದು, ಜಾತಿ ಲಾಬಿ ಮಾಡಿ  ತಮ್ಮ ಉಪಪತ್ನಿಗೆ ವಾಲ್ಮೀಕಿ ಪ್ರಶಸ್ತಿ ಕೊಡಿಸಿದ್ದು, ನಾಟಕ ಅಕಾಡೆಮಿಯನ್ನು ಸ್ವಂತ ಕೆಲಸಗಳಿಗೆ ಬಳಸಿಕೊಂಡಿದ್ದು, ನಾಟಕ ಅಕಾಡೆಮಿಯಲ್ಲಿ ತಾವೇ ಸರ್ವಾಧಿಕಾರಿ ಎಂದು ಮೆರೆಯಲು ಪ್ರಯತ್ನಿಸಿದ್ದು,  ಒಂದೇ ಒಂದು ನಾಟಕವನ್ನು ಮಾಡದೇ ಕೇಂದ್ರ ಸರಕಾರದ ಅನುದಾನವನ್ನು ತಾವೂ ತೆಗೆದುಕೊಂಡಿದ್ದೇ ಅಲ್ಲದೇ ತಮ್ಮ ಮಗನಿಗೂ ಕೊಡಿಸಿದ್ದು, ಕೇಂದ್ರ ಸರಕಾರ ಸಾಂಸ್ಕೃತಿಕ ಕೆಲಸಗಳಿಗೆ ಕೊಡಮಾಡುವ ಅನುದಾನವನ್ನು ಅಕ್ರಮವಾಗಿ ಹೊಡೆಯುವ ಕಳ್ಳರ ಗುಂಪನ್ನು ಸೇರಿಕೊಂಡಿದ್ದು.. ಹೀಗೆ ಅನೇಕಾನೇಕ ರಂಗವಿರೋಧಿ ಕೆಲಸಗಳನ್ನು ಗುಡಿಹಳ್ಳಿ ಮಾಡಿದ್ದನ್ನು ಕಾಲಕಾಲಕ್ಕೆ ಲೇಖನಗಳಲ್ಲಿ ಬರೆದು ರಂಗಭೂಮಿಯವರಿಗೆ ತಿಳಿಸುತ್ತಾ ಬಂದಿದ್ದೆ. ಗುಡಿಹಳ್ಳಿಯ ಮೇಲೆ ಯಾವುದೇ ದ್ವೇಷ ಅಸೂಯೆ ಇಲ್ಲದೇ ಕೇವಲ ರಂಗಭೂಮಿಯ ಮೇಲಿನ ಬದ್ದತೆ ಹಾಗೂ ರಂಗಪತ್ರಕರ್ತನಾಗಿ ನನ್ನ ವೃತ್ತಿಯನ್ನು ನಾನು ನಿಷ್ಟೆಯಿಂದ ಮಾಡಿದ್ದಂತೂ ಸತ್ಯ. ಗುಡಿಹಳ್ಳಿ ಮಾತ್ರವಲ್ಲಾ ರಂಗಭೂಮಿಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಬಹುತೇಕ ರಂಗದಲ್ಲಾಳಿಗಳ ಬಗ್ಗೆಯೂ ಬರೆದು ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ.. ಮೂವತ್ತು ವರ್ಷಗಳ ಕಾಲ ಪ್ರಜಾವಾಣಿ ಬಳಗದಲ್ಲಿ ಪತ್ರಕರ್ತನಾಗಿ ವೃತ್ತಿ ಮಾಡಿ ನಿವೃತ್ತರಾದ ಈ ವಯೋವೃದ್ದ ಗುಡಿಹಳ್ಳಿಯವರಿಗೆ ವಸ್ತುನಿಷ್ಟ ಲೇಖನವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲು ಆಗಲಿಲ್ಲವಲ್ಲಾ ಎನ್ನುವುದೇ ಬೇಸರದ ಸಂಗತಿ. ತಪ್ಪು ಮಾಡಿದಾಗ ಬರೆದು ಎಚ್ಚರಿಸಿದವರನ್ನೇ ಶತಾಯ ಗತಾಯ ದ್ವೇಷಿಸುವ ಬೌದ್ದಿಕ ದಾರಿದ್ರ್ಯ ಗುಡಿಹಳ್ಳಿಯವರಿಗೆ ಬರಬಾರದಿತ್ತು.

ಗುಡಿಹಳ್ಳಿ ರಂಗಭೂಮಿಗೆ ಕೊಟ್ಟಿದ್ದು ಅಲ್ಪವಾದರೆ ಪಡೆದದ್ದು ಬೇಕಾದಷ್ಟಿದೆ. ಪದವಿ, ಪುರಸ್ಕಾರ, ಸನ್ಮಾನ, ಬಿಡಿಎ ಸೈಟುಗಳನ್ನೆಲ್ಲಾ ರಂಗಭೂಮಿಯ ಹೆಸರಲ್ಲಿ ಪಡೆದಿದ್ದು ಬಹಿರಂಗ ಸತ್ಯ. ಯೋಗ್ಯತೆ ಇಲ್ಲದಿದ್ದರೂ,  ಎಂದೂ ಪ್ರತ್ಯಕ್ಷವಾಗಿ ರಂಗಕೆಲಸಗಳಲ್ಲಿ ತೊಡಗಿಕೊಳ್ಳದಿದ್ದರೂ ರಂಗಭೂಮಿಯಿಂದಾ ಇಷ್ಟೆಲ್ಲವನ್ನೂ ಪಡೆದ ಗುಡಿಹಳ್ಳಿ ಒಂದಿಷ್ಟಾದರೂ ರಂಗಬದ್ದತೆಯನ್ನು ಬೆಳೆಸಿಕೊಂಡಿದ್ದರೆ ಫಲಾನುಭವಿಯಾಗಿದ್ದಕ್ಕೂ ಸಾರ್ಥಕವಾಗುತ್ತಿತ್ತು. ಆದರೆ ಸ್ವಾರ್ಥ, ಸ್ವಜನಪಕ್ಷಪಾತ ಹಾಗೂ ಸಣ್ಣತನಗಳನ್ನೇ ಮೈಗೂಡಿಸಿಕೊಂಡಿರುವ ಗುಡಿಹಳ್ಳಿಯಂತವರು ಇನ್ನೇನು ತಾನೇ ಮಾಡಲು ಸಾಧ್ಯ? ಇವರ ಸಣ್ಣತನಗಳಿಗೆ ಇನ್ನೊಂದಿಷ್ಟು ಉದಾಹರಣೆಗಳನ್ನು ಹೇಳುತ್ತೇನೆ.

ಗುಡಿಹಳ್ಳಿ ನಾಟಕ ಅಕಾಡೆಮಿಯ ಕೋಆಪ್ಟ್ ಮೇಂಬರ್ ಆಗಲು ಏನೆಲ್ಲಾ ಮಾಡಬಾರದ್ದನ್ನು ಮಾಡಿದರು ಎನ್ನುವ ಲೇಖನವನ್ನು ನಾನು ಬರೆದ ಮಾರನೆಯ ದಿನ ನೇರವಾಗಿ ಅಗ್ನಿ ಪತ್ರಿಕೆಯ ಮಾಲೀಕರಾದ ಶ್ರೀಧರ್‌ರವರಿಗೆ ಪೋನ್ ಮಾಡಿದ ಗುಡಿಹಳ್ಳಿ ನೋಡಿ ಅಗ್ನಿ ಸಂಪಾದಕರಾದ ಹತಗುಂದಿಯವರು ನಿಮ್ಮ ಪತ್ರಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಶಶಿಕಾಂತ ಯಡಹಳ್ಳಿ ಜೊತೆಗೆ ಸೇರಿಕೊಂಡು ನನ್ನ ವಿರುದ್ಧ ಬರೆದು ಮಾನಹಾನಿ ಮಾಡುತ್ತಿದ್ದಾರೆ. ಹತಗುಂದಿಯವರಿಂದಾಗಿ ನಿಮ್ಮ ಪತ್ರಿಕೆಯ ಹೆಸರು ಕೆಡುತ್ತಿದೆ.. ಎಂದೆಲ್ಲಾ ಹೇಳಿದ್ದು ಕೇಳಿ ಸಾಕಾಗಿ ರೀ ನಮ್ಮ ಪತ್ರಿಕೆ ವಿಚಾರ ನನಗೆ ಗೊತ್ತು.. ನೀವು ಹೇಳುವುದೇನೂ ಬೇಕಾಗಿಲ್ಲಾ ಎಂದು ಶ್ರೀಧರರವರು ಗದರುವವರೆಗೂ ಗುಡಿಹಳ್ಳಿಯ ಆರೋಪ ಸಾಗೇ ಇತ್ತು. ಲೇಖನ ಬರೆದದ್ದು ನಾನು ಆದರೆ ನನ್ನ ಸ್ನೇಹಿತರು ಎನ್ನುವ ಕಾರಣಕ್ಕೆ ಹತಗುಂದಿಯವರ ಮೇಲೆ ಇಲ್ಲಸಲ್ಲದ ಅರೋಪ ಮಾಡಿ ಶ್ರೀಧರರವರಿಗೆ ಚಾಡಿ ಹೇಳಿ ಅಗ್ನಿ ಸಂಪಾದಕರನ್ನು ಕೆಲಸದಿಂದ ತೆಗೆಸಿಹಾಕುವ ಭಾರೀ ಕುತಂತ್ರ ಮಾಡಿ ತೋಪಾದ ಗುಡಿಹಳ್ಳಿಯ ದ್ವೇಷದ ಬಗ್ಗೆ ಇನ್ನೇನು ಹೇಳುವುದು.

ಕಲಾಗ್ರಾಮದಲ್ಲಿ ರೇಣುಕಾರೆಡ್ಡಿಯವರು ರಂಗಕಿರಣ ತಂಡದಿಂದಾ ರಂಗೋತ್ಸವವನ್ನು ಹಮ್ಮಿಕೊಂಡಿದ್ದರು. ಮೊದಲದಿನ ಅತಿಥಿಯಾಗಿ ನನ್ನ ಜೊತೆಗೆ ಗುಡಿಹಳ್ಳಿ ಹೆಸರೂ ಇತ್ತು. ನನ್ನ ಜೊತೆಗೆ ವೇದಿಕೆ ಹಂಚಿಕೊಳ್ಳಲು ಹಿಂಜರಿದ ಗುಡಿಹಳ್ಳಿಯವರು ಅವತ್ತು ಬೆಂಗಳೂರಿನಲ್ಲೇ ಇದ್ದರೂ ಮೈಸೂರಲ್ಲಿರುವೆನೆಂದು ಸುಳ್ಳು ನೆಪ ಹೇಳಿ ಕಾರ್ಯಕ್ರಮಕ್ಕೆ ಬರದೇ ತಪ್ಪಿಸಿಕೊಂಡರು. ಮೊದಲು ಒಪ್ಪಿಕೊಳ್ಳಬಾರದಿತ್ತು. ಒಪ್ಪಿದ ಮೇಲೆ ತಪ್ಪಿಸಿಕೊಳ್ಳಬಾರದು. ತಪ್ಪಿತಸ್ತ ಮನೋಭಾವ ಇದ್ದವರು ಮಾತ್ರ ಹೀಗೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಿಂತಾ ಸಣ್ಣತನದ ಇನ್ನೊಂದು ಉದಾಹರಣೆ ಹೀಗಿದೆ. ವಾಟ್ಸಾಪ್ ಗುಂಪೊಂದರಲ್ಲಿ ನಾನೂ ಇದ್ದೆ.. ಜೊತೆಗೆ ಗುಡಿಹಳ್ಳಿ ಕೂಡಾ. ನನ್ನ ಕವಿತೆಗಳನ್ನು ಜೆ.ಲೊಕೇಶರವರು ಆ ಗುಂಪಲ್ಲಿ ಯಾವಾಗಲೂ ಶೇರ್ ಮಾಡ್ತಾ ಇದ್ದರು. ಕವಿತೆಗಳು ನನ್ನದೆಂಬ ಕಾರಣಕ್ಕೆ ಸಹಿಸಿಕೊಳ್ಳಲಾಗದ ಗುಡಿಹಳ್ಳಿ ಲೊಕೇಶರವರಿಗೆ ಅದನ್ನು ತಿಳಿಸಿ ಆ ವಾಟ್ಸಾಪ್ ಗುಂಪಿನಿಂದಲೇ ಎಕ್ಸಿಟ್ ಆಗಿ ತಮ್ಮ ದ್ವೇಷದ ಮನೋಭಾವವನ್ನು ತೋರಿಸಿದರು. ಇತ್ತೀಚೆಗೆ ನಾಟಕ ಅಕಾಡೆಮಿಯ ಅವಧಿ ಪೂರ್ಣಗೊಳ್ಳುವ ಮುನ್ನ ಧಾರವಾಡದಲ್ಲಿ ಹವ್ಯಾಸಿ ರಂಗಸಮ್ಮೇಳನವನ್ನು ನಾಟಕ ಅಕಾಡೆಮಿ  ಹಮ್ಮಿಕೊಂಡಿತ್ತು. ಅದರಲ್ಲಿ ಆಹ್ವಾನಿತರಾಗಿ ಭಾಗವಹಿಸುವವರ ಪಟ್ಟಿಯಲ್ಲಿ  ಇದ್ದ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿಯೇ ತೆಗೆದುಹಾಕಿದ ಗುಡಿಹಳ್ಳಿ ತಮ್ಮ ಅಸೂಯೆ ಪ್ರವೃತ್ತಿಯನ್ನು ಮುಂದುವರೆಸಿದರು. ಹೆಸರಿಗೆ ತಕ್ಕಹಾಗೆಯೇ ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವ ಹಾಗಿರುವ ಈ  ನಾಗಣ್ಣನ ದ್ವೇಷ ನೂರು ವರುಷ ಎನ್ನುವುದು ಸಾಬೀತಾಗಿದ್ದೇ ಪ್ರೆಸ್ ಕ್ಲಬ್ಬಲ್ಲಿ ನನ್ನ ಹೆಸರನ್ನು ವಿನಾಕಾರಣ ತೆಗೆದುಹಾಕಬೇಕೆಂದು ಹಠಕ್ಕೆ ಬಿದ್ದು ತಾವೇ ಹೊರಗೆ ಹೋದಾಗ.

ಇತ್ತೀಚೆಗೆ ನಡೆದ ಇನ್ನೊಂದು ಘಟನೆಯನ್ನು ಹೇಳಲೇಬೇಕು. ನಾಟಕ ಅಕಾಡೆಮಿಯ ಸದಸ್ಯರಾಗಿ ಕೈಬಾಯಿ ಹೆಸರು ಕೆಡಿಸಿಕೊಂಡಿದ್ದರೂ ಹೇಗಾದರೂ ಮಾಡಿ ಈ ಸಲ ನಾಟಕ ಅಕಾಡೆಮಿಯ ಅಧ್ಯಕ್ಷರಾಗಲೇಬೇಕೆಂದು ಗುಡಿಹಳ್ಳಿ ತಮ್ಮ ಪ್ರಯತ್ನ ಶುರುಮಾಡಿಕೊಂಡರು. ಅಕಾಡೆಮಿಯ ಅಧ್ಯಕ್ಷರಾಗಲು ರಂಗಸಂಪದದ ಹಿರಿಯ ರಂಗಸಂಘಟಕರಾದ ಜೆ.ಲೋಕೇಶರವರೇ ಸೂಕ್ತ ಎನ್ನುವುದು ಬಹುತೇಕ ರಂಗಕರ್ಮಿಗಳ ಅಭಿಪ್ರಾಯವಾಗಿತ್ತು. ನಾನೂ ನಾಟಕ ಅಕಾಡೆಮಿಯ ಅಧ್ಯಕ್ಷಗಿರಿಗೆ ಆಕಾಂಕ್ಷಿ ಎಂದು ಲೋಕೇಶರವರಿಗೆ ತಿಳಿಸಿದ ಗುಡಿಹಳ್ಳಿ ಹೋಗಿ ತಮ್ಮ ಗುರು ಬರಗೂರರಿಗೆ ದುಂಬಾಲು ಬಿದ್ದರು. ಈಗಾಗಲೇ ಗುಡಿಹಳ್ಳಿಯ ಒತ್ತಾಸೆಯಂತೆ ಅವರ ಉಪಪತ್ನಿಗೆ ವಾಲ್ಮೀಕಿ ಪ್ರಶಸ್ತಿಯನ್ನು ಕೊಟ್ಟು ಜಾತೀವಾದಿ ಎನ್ನುವ ಆರೋಪವನ್ನು ಹೊತ್ತುಕೊಂಡಿದ್ದ ಬರುಗೂರರು ಈ ಸಲ ಗುಡಿಹಳ್ಳಿಯವರನ್ನು ದೂರವೇ ಇಟ್ಟರು. ಗುಡಿಹಳ್ಳಿ ತನ್ನ ಪ್ರಭಾವ ಬೀರಿ ತನ್ನನ್ನು ಈ ಸಲ ನಾಟಕ ಅಕಾಡೆಮಿಗೆ ಅಧ್ಯಕ್ಷನನ್ನಾಗಿ ಮಾಡುತ್ತಾರೆಂದುಕೊಂಡಿದ್ದ ಎಲ್.ಕೃಷ್ಣಪ್ಪನವರಿಗೆ ಗುಡಿಹಳ್ಳಿಯೇ ಅಧ್ಯಕ್ಷರಾಗಲು ಪ್ರಯತ್ನಿಸುವುದನ್ನು ನೋಡಿ ಅಸಹ್ಯಪಟ್ಟುಕೊಂಡು ತಮ್ಮ ಪತ್ರಿಕೆಯ ಸಂಪಾದಕ ಸ್ಥಾನದಿಂದ ಗುಡಿಹಳ್ಳಿಯವರನ್ನು ಹೊರಹಾಕಿ ನಿಟ್ಟುಸಿರು ಬಿಟ್ಟರು. ಯಾವಾಗ ಯಾವ ಕಡೆಗೂ ಬೆಂಬಲ ಸಿಗದೇ ನಾಟಕ ಅಧ್ಯಕ್ಷರಾಗಲು ಸಾಧ್ಯವಿಲ್ಲ ಎಂಬ ಅರಿವು ಗುಡಿಹಳ್ಳಿಯವರಿಗೆ ಆಯಿತೋ ಆಗ ಜೆ.ಲೊಕೇಶರವರಿಗೆ ಪೋನ್ ಮಾಡಿ ನಾನೂ ನಿಮ್ಮನ್ನು ಬೆಂಬಲಿಸುತ್ತೇನೆಂದು ಊಸರವಳ್ಳಿಯ ತರ ಮಾತು ಬದಲಾಯಿಸಿ ಗಾಳಿ ಬಂದತ್ತ ತೂರಿಕೊಳ್ಳಲು ನೋಡಿದರು. ಆದರೆ ಅದಕ್ಕೊಂದು ಪರೋಕ್ಷ ಬೇಡಿಕೆಯನ್ನೂ ಇಟ್ಟರು. ಅದೇನೆಂದರೆ ಹೇಗಾದರೂ ಮಾಡಿ ನಿಮ್ಮ ಆತ್ಮೀಯರಾಗಿರುವ ಶಶಿಕಾಂತ ಯಡಹಳ್ಳಿಯವರನ್ನು ದೂರವಿಡಬೇಕು ಎಂಬುದು. ಇದನ್ನು ಕೇಳಿ ಸಿಟ್ಟಿಗೆದ್ದ ಲೊಕೇಶರವರು ಈ ಗುಡಿಹಳ್ಳಿಯ ನೀಚತನಕ್ಕೆ ಬೇಸತ್ತು ಉಗಿದು ಉಪ್ಪಿನಕಾಯಿ ಹಾಕಿ ಪೋನಿಟ್ಟರು.

ಗುಡಿಹಳ್ಳಿ ಎನ್ನುವ ನಾಗಣ್ಣನ ದ್ವೇಷ ಒಂದೆರಡಲ್ಲಾ.. ಹೇಳುತ್ತಾ ಹೋದರೆ ಪುಟಗಳು ಸಾಲವು. ಬೇರೆಯವರ ಅನುಭವ ಇನ್ನೂ ವಿಸ್ತಾರವಾಗಿವೆ. ಬೇಕಾದಾಗ ಬಳಿಸಿಕೊಂಡು ಬೆನ್ನಿಗೆ ಚೂರಿ ಹಾಕಿದ ಪ್ರಕರಣಗಳು ಬೇಕಾದಷ್ಟಿವೆ. ಅದಕ್ಕೆ ದಾವಣಗೆರೆಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳರವರು ಸಿಟ್ಟಿಗೆದ್ದು ಗುಡಿಹಳ್ಳಿಗೆ ಬಾರಿನಲ್ಲಿ ಹಿಡಿದು ಬಾರಿಸಲು ಹೋಗಿದ್ದೇ ಸಾಕ್ಷಿ. ಆರ್.ನಾಗೇಶರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಕಡಕೋಳರವರು ಸದಸ್ಯರಾಗಿದ್ದರು. ನಾಟಕ ಅಕಾಡೆಮಿಯ ಅವಾರ್ಡ ನನಗೇ ಕೊಡಿಸಬೇಕೆಂದು ಗುಡಿಹಳ್ಳಿಯವರು ಕಡಕೋಳರವರಿಗೆ ದುಂಬಾಲು ಬಿದ್ದರು. ಅಕಾಡೆಮಿಯ ಸಭೆಯಲ್ಲಿ ಗುಡಿಹಳ್ಳಿಯವರ ಹೆಸರನ್ನು ವಾರ್ಷಿಕ ಪ್ರಶಸ್ತಿಗಾಗಿ ಕಡಕೋಳರು ಪ್ರಸ್ತಾಪಿಸಿದಾಗ ಆರ್.ನಾಗೇಶರವರು ಸ್ಪಷ್ಟವಾಗಿ ನಿರಾಕರಿಸಿ ಈ ಗುಡಿಹಳ್ಳಿ ಕೊಡುಗೆ ರಂಗಭೂಮಿಗೆ ಏನಿದೆ? ಎಂದು ಪ್ರಶ್ನಿಸಿದರು. ದಾವಣಗೆರೆಯಿಂದಾ ಅರ್ಹರಾದ ಮೂವರ ಹೆಸರನ್ನು ಶಿಪಾರಸ್ಸು ಮಾಡಿ ಎಂದು ಕಡಕೋಳರವರಿಗೆ ಸೂಚಿಸಿದರು. ಆದರೆ.. ಗುಡಿಹಳ್ಳಿಯವರು ಕಡಕೋಳರ ಹಿಂದೆ ನಕ್ಷತ್ರಿಕನಂತೆ ಬಿದ್ದುಬಿಟ್ಟಿದ್ದರು. ಈ ಸಲ ಕೊಡಿಸದಿದ್ದರೆ ನನಗೆ ಮುಂದೆಂದೂ ಪ್ರಶಸ್ತಿ ಸಿಗಲು ಸಾಧ್ಯವೇ ಇಲ್ಲಾ. ಹೇಗಾದರೂ ಮಾಡಿ ಅವಾರ್ಡ ಕೊಡಿಸಲೇಬೇಕೆಂದು ದಿನಕ್ಕಾರು ಸಲ ಪೋನ್ ಮಾಡಿ ಒತ್ತಡ ತರಲು ಆರಂಭಿಸಿದರು. ಇದರಿಂದಾಗ ಕಡಕೋಳರವರು ಮೂರು ಹೆಸರನ್ನು ಸೂಚಿಸುವ ಬದಲು ಗುಡಿಹಳ್ಳಿಯವರ ಹೆಸರನ್ನೇ ಮೂರು ಸಲ ಹೇಳಿ ಪ್ರಶಸ್ತಿ ಕೊಡಲು ಪಟ್ಟು ಹಿಡಿದರು. ಆಗಲೂ ನಾಗೇಶರವರು ನಿರಾಕರಿಸಿದರಾದರೂ ಸದಸ್ಯರ ಹಕ್ಕನ್ನು ಕೊನೆಗಳಿಗೆಯಲ್ಲಿ ಪುರಸ್ಕರಿಸಿ ಗುಡಿಹಳ್ಳಿಯವರಿಗೆ ಪ್ರಶಸ್ತಿಯನ್ನು ಕೊಟ್ಟರು. ಆದರೆ ಉಪಕಾರ ಪ್ರಜ್ಞೆ ಇಲ್ಲದ ಗುಡಿಹಳ್ಳಿ ಪ್ರಜಾವಾಣಿ ಬಳಗದಲ್ಲಿ ಇದ್ದಷ್ಟೂ ಕಾಲ ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಡಕೋಳರವರ ಪುತ್ರಿಗೆ ರಂಗಭೂಮಿಯ ಕುರಿತು ಒಂದೇ ಒಂದು ಲೇಖನ ಬರೆಯಲೂ ಅವಕಾಶ ಕೊಡದಂತೆ ಮಾಡಿಬಿಟ್ಟರು. ಆ ಯುವ ಪತ್ರಕರ್ತೆಯ ಬೆಳವಣಿಗೆಗೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕಿದರು. ಅವತ್ತು ಕಲಾಕ್ಷೇತ್ರದ ಎದುರಿನಲ್ಲಿರುವ ಬಾರಿನಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಶೇಖ ಮಾಸ್ತರರ ಜೊತೆಗೆ ಗುಡಿಹಳ್ಳಿ ಹಾಗೂ ಕಡಕೋಳರವರು ಕುಳಿತು ಗಂಟಲು ಹಸಿ ಮಾಡಿಕೊಳ್ಳುತ್ತಿದ್ದರು. ಒಂದೆರಡು ಪೆಗ್ಗು ಒಳಹೋಗುತ್ತಿದ್ದಂತೆ ತಮ್ಮ ವರಾತ ತೆಗೆದ ಗುಡಿಹಳ್ಳಿ ಕಡಕೋಳರವರನ್ನು ನಿಂದಿಸಿದರು. ಅವರ ಮಗಳಿಗೆ ತಾನೇ ನೌಕರಿ ಕೊಡಿಸಿದ್ದೇನೆಂದು ಬೋಂಗು ಬಿಟ್ಟರು. ಕೇಳುವಷ್ಟು ಕೇಳಿ ರೋಸೆದ್ದುಹೋದ ಕಡಕೋಳರು ಎದ್ದು ಗುಡಿಹಳ್ಳಿಯ ಕಾಲರ್ ಹಿಡಿದು ಇನ್ನೇನು ತದುಕಬೇಕು ಎನ್ನುವಷ್ಟರಲ್ಲಿ ಶೇಖ ಮಾಸ್ತರರು ಕಡಕೋಳರವರ ಕೈಹಿಡಿದು ಕೂಡಿಸಿದರು. ತಡೆಹಿಡಿಯದೇ ಇದ್ದಿದ್ದರೆ ಗುಡಿಹಳ್ಳಿ ಮುಖ ಮೂತಿ ಒಡೆದೇ ಹೋಗಿತ್ತಿತ್ತು. ಅವತ್ತಿನಿಂದಾ ಕಡಕೋಳರ ಮೇಲೆ ದ್ವೇಷಕಾರಲು ಶುರುಮಾಡಿದ ನಾಗಣ್ಣ ಅವರ ಮೇಲೆ ವಿಷ ಕಾರುವುದನು ನಿಲ್ಲಿಸಿಲ್ಲಾ.

ಗುಡಿಹಳ್ಳಿಯವರ ವ್ಯಯಕ್ತಿಕ ತೀಟೆ ತೆವಲು ಲೀಲೆ ದೌರ್ಬಲ್ಯಗಳ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ರಂಗಭೂಮಿಯಲ್ಲಿರುವ ಬಹುತೇಕರಿಗೆ ಅವೆಲ್ಲಾ ಗೊತ್ತಿರುವಂತಹ ಸಂಗತಿಗಳೇ ಆಗಿದ್ದರಿಂದ ಅವುಗಳ ಬಗ್ಗೆ ಮಾತಾಡುವುದು ಅನಗತ್ಯ. ಹಾಗೂ ಅದು ಅವರ ವ್ಯಯಕ್ತಿಕ. ಆದರೆ..  ಗುಡಿಹಳ್ಳಿ ರಂಗಭೂಮಿಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ನನ್ನ ವಿರೋಧವಿದೆ. ಹಾಗೂ ಪ್ರತಿರೋಧದ ದ್ವನಿಯನ್ನು ಅಡಗಿಸಲು ಪ್ರಯತ್ನಿಸುವ ಗುಡಿಹಳ್ಳಿಯವರ ದೂರ್ತತನದ ಬಗ್ಗೆ ಮಾತ್ರ ಮಾತಾಡುವುದು ಬೇಕಾದಷ್ಟಿದೆ. ಒಬ್ಬನೇ ಒಬ್ಬ ಉತ್ತರಾಧಿಕಾರಿಯನ್ನೂ ಬೆಳಸದೇ, ಸ್ವಾರ್ಥವಿಲ್ಲದೇ ಯಾರಿಗೂ ಸಹಾಯ ಮಾಡದೇ, ಎಲ್ಲವನ್ನೂ ತಾವೊಬ್ಬರೇ ಬಳಸಿಕೊಳ್ಳಬೇಕು ಎನ್ನುವ ಹಪಾಹಪಿಗೆ ಬಿದ್ದ ಗುಡಿಹಳ್ಳಿಯವರು ವಯಸ್ಸಾದಂತೆ ಮಾಗಿದ್ದರೆ ಒಂದಿಷ್ಟು ಹೆಸರಾದರೂ ಉಳಿಯುತ್ತಿತ್ತು. ಸ್ವಾರ್ಥ, ದ್ವೇಷ, ಒಳಹುನ್ನಾರ ಹಾಗೂ ಸಣ್ಣತನಗಳನ್ನು ಬಿಟ್ಟಿದ್ದರೆ ಒಂದಿಷ್ಟಾದರೂ ಸ್ನೇಹಿತರು ಜೊತೆಗಿರುತ್ತಿದ್ದರು. ಯಾರನ್ನೋ ಓಲೈಸಲು ಬರೆಯುವ ರಂಗಪ್ರಯೋಗ ವರದಿಗಳನ್ನು ಬಿಟ್ಟು ವಸ್ತುನಿಷ್ಟವಾಗಿ ವಿಮರ್ಶೆಗಳನ್ನು ಬರೆದಿದ್ದರೆ ಕನಿಷ್ಟ ರಂಗವಿಮರ್ಶಕನಾಗಿ ಗುರುತಿಸಿಕೊಳ್ಳಬಹುದಿತ್ತು. ಹೋಗಲಿ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದನ್ನು ರೂಢಿಸಿಕೊಂಡಿದ್ದರೂ ಹೀಗೆ ಒಂಟಿ ಅತೃಪ್ತ ಆತ್ಮದಂತೆ ಅಲೆದಾಡುವುದು ತಪ್ಪುತ್ತಿತ್ತು. ಏನೂ ಇಲ್ಲದೇ ಎಲ್ಲೂ ಸಲ್ಲದೇ ಪ್ರಶ್ನಿಸಿದವರನ್ನು ದ್ವೇಷಿಸುತ್ತಾ, ವಿರೋಧಿಸಿದವರನ್ನು ಮಟ್ಟಹಾಕಲು ಬಯಸುತ್ತಾ ತಂತ್ರ ಕುತಂತ್ರಗಳಲ್ಲಿಯೇ ಬದುಕುತ್ತಿರುವ ಗುಡಿಹಳ್ಳಿ ಎನ್ನುವ ವಯೋವೃದ್ದರನ್ನು ನೋಡಿದರೆ ಅಯ್ಯೋ ಅನ್ನಿಸದೇ ಇರದು. ಇದೆಲ್ಲಾ ಬೇಕಿರಲಿಲ್ಲಾ. ವಯಸ್ಸಿನ ಗಾಂಭೀರ್ಯತೆಯನ್ನು ಕಾಪಾಡಿಕೊಂಡು, ತನಗಿಂತಾ ಕಿರಿಯರನ್ನು ಪ್ರೋತ್ಸಾಹಿಸಿ ಬೆಳೆಸುವ ಸ್ವಾಭಾವವನ್ನು ರೂಢಿಸಿಕೊಂಡು, ವೃತ್ತಿ ನಿಷ್ಟೆ ಹಾಗೂ ರಂಗಬದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದರೆ ಗುಡಿಹಳ್ಳಿಯವರ ಹೆಸರು ರಂಗಚರಿತ್ರೆಯಲ್ಲಿ ದಾಖಲಾಗುತ್ತಿತ್ತು. ಈಗಲೂ ದ್ವೇಷ ಅಸೂಯೆ ಹಾಗೂ ಸ್ವಾರ್ಥವನ್ನು ತ್ಯಜಿಸಿ ಎಲ್ಲರಿಗೂ ಒಳಿತನ್ನು ಬಯಸಿದರೆ ಒಂದಿಷ್ಟಾದರೂ ಹೆಸರನ್ನು ಉಳಿಸಿಕೊಳ್ಳಬಹುದು. ಎನಗಿಂತ ಕಿರಿಯರಿಲ್ಲಾ. ಎಂದುಕೊಂಡು ಬದುಕಿದ್ದರೆ ಬಸವಣ್ಣನ ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತು. ಒಡಲೊಳಗಿನ ಕಿಚ್ಚು ತನ್ನ ಸುಡದೇ ಬೇರೆಯವರ ಸುಡದು.. ಎನ್ನುವ ವಚನ ಅರ್ಥಮಾಡಿಕೊಂಡಿದ್ದರೆ ಸಾಕಿತ್ತು ಮನುಷ್ಯನಾಗಲು.

ಯಾವುದೋ ಕಾರ್ಯಕ್ರಮದಲ್ಲಿ ನನ್ನ ಹೆಸರನ್ನು ಹಠಕ್ಕೆ ಬಿದ್ದು ತೆಗೆಸಿ ಹಾಕಲು ಪಯತ್ನಿಸುವ ಮೂಲಕ ನನ್ನ ರಂಗಕೆಲಸಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲಾ. ನನ್ನ ಹೆಸರು ಇರಲಿ ಬಿಡಲಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ರಂಗಭೂಮಿಯ ಬಹುತೇಕ ವಿಭಾಗಗಳಲ್ಲಿ ಕೆಲಸ ಮಾಡಿಕೊಂಡೇ ಬಂದವನು ನಾನು. ಎಂದೂ ಪದವಿ ಪ್ರಶಸ್ತಿ ಅನುದಾನ ಅವಕಾಶಗಳಿಗೆ ಆಸೆಪಟ್ಟವನಲ್ಲ. ಯಾರು ಇವುಗಳಿಗೆಲ್ಲಾ ಆಸೆ ಪಡುತ್ತಾರೋ ಅವರು ಅವಕಾಶವಾದಿಗಳು ಹಾಗೂ ರಾಜೀಕೋರರು ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪ್ರಸ್‌ಕ್ಲಬ್ಬಿನ ಸಹಯೋಗದೊಂದಿಗೆ ಪ್ರಯೋಗರಂಗ ಹಮ್ಮಿಕೊಂಡ ವಿಶ್ವರಂಗಭೂಮಿ ದಿನಾಚರಣೆಯ ಸಂವಾದದಲ್ಲೂ ಭಾಗವಹಿಸುತ್ತಿದ್ದೇನೆ ಹಾಗೂ ಅವತ್ತು ನಾನು ಬರೆದು ನಿರ್ದೇಶಿಸಿದ ಕಾಸ್‌ಲೆಸ್ ಎನ್ನುವ ಬೀದಿನಾಟಕವನ್ನೂ ನಮ್ಮ ಕಲಾವಿದರೊಂದಿಗೆ ಪ್ರದರ್ಶಿಸುತ್ತಿದ್ದೇನೆ. ಸ್ವಾರ್ಥ ರಹಿತವಾಗಿ ಕೆಲಸ ಮಾಡುವವರಿಗೆ ಅವಕಾಶಗಳು ಸಿಕ್ಕೇ ಸಿಗುತ್ತವೆ. ಗುಡಿಹಳ್ಳಿಯಂತವರ ಕುತಂತ್ರದಿಂದ ಒಂದೆರಡು ಅವಕಾಶಗಳು ಸಿಗದೇ ಹೋದರೂ ಅವಕಾಶಗಳನ್ನು ಹುಟ್ಟುಹಾಕಿಕೊಳ್ಳುವ ಜಾಣ್ಮೆ ಹಾಗೂ ತಾಳ್ಮೆ ಇದ್ದವರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಾರೆ. ಈ ಸತ್ಯ ಗುಡಿಹಳ್ಳಿಯಂತವರಿಗೆ ಅರ್ಥವಾದಷ್ಟೂ ಅವರಿಗೆ ಒಳ್ಳೆಯರು. ಅಂಗೈಯನ್ನು ಅಡ್ಡ ಹಿಡಿದು ಸೂರ್ಯಕಾಂತಿ ತಡೆಯಲಾಗದು. ಬೊಗಸೆ ಅಡ್ಡಗಟ್ಟಿ ಹರಿವ ನೀರ ಸೆಳವು ನಿಲ್ಲಿಸಲಾಗದು. ಹೆಸರು ತೆಗೆಸಿ ಕಾರ್ಯನಿರತರ ಕೈಕಟ್ಟಿಹಾಕಲಾಗದು.. ದ್ವೇಷದಿಂದ ಏನನ್ನೂ ಸಾಧಿಸಲಾಗದು..  ಸಾರ್ವಕಾಲಿಕ ಸತ್ಯ ಗುಡಿಹಳ್ಳಿಯಂತವರಿಗೆ ತಿಳಿಯಬೇಕಿದೆ. ತಿಳಿಯಲಾಗದಿದ್ದರೆ ಕಾಲವೇ ತಿಳಿಸುತ್ತದೆ. ಎಲ್ಲ ಮುಗಿದ ಮೇಲೆ ಪಶ್ಚಾತ್ತಾಪ ಪಡುವ ಬದಲು ಇನ್ನೂ ಬಾಕಿ ಇರುವಷ್ಟು ಕಾಲವಾದರೂ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಧ್ಯವಾದಷ್ಟೂ ಗುಡಿಹಳ್ಳಿಯವರ ಬದುಕು ಸಾಗಲಿ. ಮುನಿಯದೇ, ತನ್ನಬಣ್ಣಿಸದೇ, ಎದುರು ಹಳಿಯದೇ.. ಜೀವನದ ಅಂತಿಮ ಹಂತದ ಪಯಣ ಸುಖಕರವಾಗಲಿ. ಅದು ಹೇಗೋ ಎಲ್ಲವನ್ನೂ ಪಡೆದಾದ ಮೇಲೆ ಇನ್ನೇನಿದೆ.. ಇನ್ನು ಕಿರಿಯರಿಗೆ ಒಳಿತು ಬಯಸುತ್ತಾ ಮಾರ್ಗದರ್ಶಕರಾಗಿದ್ದರೆ ಗುಡಿಹಳ್ಳಿಯಂತವರಿಗೆ ಒಂದಿಷ್ಟು ಕಿಮ್ಮತ್ತು.. ಇದೇ ಸಾರ್ಥಕ ಬದುಕಿನ ಹಕೀಕತ್ತು. ಗಾಜಿನ ಮನೆಯಲ್ಲಿದ್ದು ಬೇರೆಯವರಿಗೆ ಹಾನಿ ಮಾಡಬಯಸಿದರೆ ಅದರ ಪ್ರತಿಫಲವನ್ನೂ ಅನುಭವಿಸಲೇಬೇಕಾಗುತ್ತದೆ.  ಆದಷ್ಟು ಬೇಗ ದ್ವೇಷ ಅಸೂಯೆ ಸ್ವಾರ್ಥದ ವ್ಯಾಧಿಯಿಂದಾ ಗುಡಿಹಳ್ಳಿಯವರು ಗುಣಮುಖರಾಗಲಿ  ಎಂದು ಮನಸಾರೆ ಹಾರೈಸುವೆ. 

                           -ಶಶಿಕಾಂತ ಯಡಹಳ್ಳಿ                     


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ